Tuesday, June 14, 2011

" ಅಪ್ಪನ ಬಗ್ಗೆ ಬರೆಯಲೇಬೇಕೆನಿಸಿ... ಬರೆದದ್ದು ... "

                              


ನಾವೆಲ್ಲರೂ ಒಪ್ಪಿಕೊಳ್ಳಬೇಕಾದ ಚಿಕ್ಕದೊಂದು ಕಟು ಸತ್ಯ ಇದು. ಈ ಜಗತ್ತಿನ ಒಟ್ಟು ಸಾಹಿತ್ಯವನ್ನೆಲ್ಲ ಒಂದೆಡೆ ರಾಶಿ ಹಾಕಿಕೊಂಡು ನೋಡಿದರೆ ,ಅತೀ ಹೆಚ್ಚು ಬರೆಸಿಕೊಂಡ ವಸ್ತುವಿಷಯಗಳೆಂದರೆ ," ಪ್ರೀತಿ " ಮತ್ತು "ಅಮ್ಮ " .ಅಕ್ಷರಜ್ನಾನವಿರುವ ಪ್ರತಿಯೊಬ್ಬನೂ ಪ್ರೀತಿಯ ಬಗ್ಗೆ ಮುಲಾಜಿಗಾದರೂ ಒಂದೆರಡು ಸಾಲು ಬರೆದು ಕವಿಯೆನಿಸಿಕೊಂಡಿರುತ್ತಾನೆ .ಇನ್ನು ಅಮ್ಮ ನ ಮಮತೆ ,ವಾತ್ಸಲ್ಯ,ವಿನಯ ಗಳ ಬಗ್ಗೆ ಬರೆಯದವರೇ ಇಲ್ಲ.ತಮ್ಮ ಅವ್ವ ಸತ್ತಾಗ ಆಕೆ ಬದುಕಿದ ರೀತಿಯನ್ನು ಕುರಿತು ಪದ್ಯ ಬರೆದ ಪಿ. ಲಂಕೇಶ್ ಇದಾದ ೨೫ ವರ್ಶಗಳ ನಂತರ " ಅವ್ವ-೨" ಎಂಬ ಕವನ ಬರೆದು ತನ್ನಲ್ಲಿ ಈ ಅವ್ವ ಎಷ್ಟು ಉಳಿದುಕೊಂಡಿದ್ದಾಳೆ ಎಂದು ಸ್ಮರಿಸಿಕೊಳ್ಳುತ್ತಾರೆ. "ಮ್ಯಾಕ್ಸಿಂ ಗಾರ್ಕಿ"ಯ " Mother" ಎಂಬ ಪುಸ್ತಕ ಇವತ್ತಿಗೂ best seller.  " ನಮ್ಮಮ್ಮ ಅಂದ್ರೆ ನಂಗಿಷ್ಟ" ಅಂತ ಸಾಫ್ಟ್ ವೇರ್ ಉದ್ಯೋಗಿ  ವಸುಧೇಂದ್ರ ಬರೀತಾರೆ . ಕವಿತ ಲಂಕೆಶ್ " ಅವ್ವ" ಫಿಲಂ ಮಾಡಿದ್ರು. ಬರಗೂರರ "ತಾಯಿ" ಚಲನಚಿತ್ರ ಪ್ರಶಸ್ತಿ ಕೂಡ ಪಡೆಯಿತು . ಹೀಗೆ ಅಮ್ಮನ ಬಗ್ಗೆ ಬಂದ ಬರಹಗಳು  uncountable. ಆದರೆ ಅಮ್ಮ ಬರೆಸಿಕೊಂಡಷ್ಟು ಈ "ಅಪ್ಪ" ಎಂಬಾತ ಬರೆಸಿಕೊಳ್ಳಲಿಲ್ಲ. ನನ್ನ ಕಂಪ್ಲೇಂಟ್ ಅಮ್ಮನ ಬಗ್ಗೆ ಬರೆದಿರುವುದಕ್ಕಲ್ಲ. ಅಪ್ಪನ ಬಗ್ಗೆಯೂ ನಿಮಗೆ ಕೊಂಚ  ತಿಳಿಸುವುದು ನನ್ನ ಹಪಹಪಿಯಷ್ಟೆ.

ಅಪ್ಪ ಎಂದರೆ ಪ್ರೀತಿ, ಆತ ಯಜಮಾನ, ಆತ  Responsibility, ಆತ ಕಾಳಜಿ, ಆತ ಉಗ್ರ ಕೋಪಿ , ಆತ ಶಾಂತ, ಆತ ಮೂರ್ಖ, ಆತ ನಿಸ್ಪ್ರಹ ಪ್ರೀತಿಯ ಮೂರ್ತಿ . ನಿಮ್ಮ ಅಮ್ಮ ನಿಮಗೊಂದು ' intero- personal behaviour '  ರೂಪಿಸಿಕೊಡಲು ಪ್ರಯತ್ನಿಸುತ್ತಾಳೆ.  ಅಪ್ಪ ಮಾತ್ರ ನಿಮಗೊಂದು ಸ್ವಚ್ಛಂದದ CAREER  ರೂಪಿಸಿಕೊಡುವ ಹವಣಿಕೆಯಲ್ಲಿರುತ್ತಾನೆ. ಅತನ ಎಲ್ಲ ಸಿಟ್ಟು, ಸೆಡೆವು , ಗದರಿಕೆಗಳ ಹಿಂದಿರುವ ಉದ್ದೇಶ ನಿಮ್ಮ ಹಿತವೊಂದೆ . ದೂರದೂರಿಂದ ಜಾತ್ರೆಯಲ್ಲಿ ನಿಮಗೊಂದು ಆಟಿಕೆ ತಂದುಕೊಟ್ಟು ಮುದ್ದಾಡುವ ಅಪ್ಪ, ನೀವು ತಪ್ಪು ದಾರಿ ಹಿಡಿಯುತ್ತಿದ್ದೀರೆಂಬ ಚಿಕ್ಕ  hint  ಸಿಕ್ಕರೂ ಸಾಕು ಕೆಂಡವಾಗಿಬಿಡುತ್ತಾನೆ . ಆ ರಾತ್ರಿ ನಿಮಗೆ ಬೆತ್ತದ ರುಚಿ ತೋರಿಸುತ್ತಾನೆ. ಆಗ ಅಮ್ಮ ನಿಮ್ಮನ್ನು ಸಂತೈಸುತ್ತ ಅಪ್ಪನನ್ನು ಬೈದುಕೊಳ್ಳುತ್ತಾಳೆ . ಹೀಗಾಗಿಯೇ ಆಕೆ ಮತ್ತಷ್ಟು ಆಪ್ತವಾಗುತ್ತಾಳೆ . ನೆನಪಿಡಿ, ನಮ್ಮ ಬದುಕು ನೆಲೆಕಾಣಬೇಕಾದರೆ ಅಪ್ಪನ ಬೆತ್ತದ ರುಚಿ ಮತ್ತು ಅಮ್ಮನ ಸಾಂತ್ವನಗಳ  Combination ನಿಂದ ಮಾತ್ರ ಸಾಧ್ಯ..

ಮಹತ್ತರವಾದುದೊಂದು ಓದಿಬಿಡುತ್ತೇನೆ , ಏನೋ ಸಾಧಿಸಿಬಿಡುತ್ತೇನೆಂದು ನೀವು ಲಗ್ಗೇಜ್ ರೆಡಿಮಾಡಿಕೊಂಡು ದೂರದ ಪಟ್ಟಣಕ್ಕೆ ಹೊರಟು ನಿಂತಿರುತ್ತೀರಿ.ಆಗ ತನ್ನ ಪಂಚೆಯೊಳಗಿನ ನಿಕ್ಕರ್ ನಿಂದ ಹಣ ತೆಗೆದುಕೊಟ್ಟು , ಬಸ್ ಸ್ಟಾಪ್ ತನಕ ಬಂದು , ಒಂದಷ್ಟು ಮಾತ್ರೆ, ಒಂದು  Amrutaanjan  ಬಾಟಲ್ , Parle-G  ಬಿಸ್ಕೆತ್ ಪ್ಯಾಕ್ ಕೊಟ್ಟು, ತನ್ನ ಅಂಗಿ ಕಿಸೆಯಲ್ಲಿದ್ದ ಕೊನೆಯ 100  ರೂಪಾಯಿಯನ್ನೂ ನಿಮ್ಮ ಕಿಸೆಗೆ ತುರುಕಿ " ಅದು ಪಟ್ಟಣ ಅಲ್ಲಿ ಖರ್ಚು ಭಾಳ ಇರುತ್ತೆ ಇಟ್ಕೊ " ಅಂತ ಹೇಳಿ ತನ್ನ ಕಣ್ಣಂಚಲ್ಲಿ ಸಣ್ಣಗೆ ತೇವಮಾಡಿಕೊಂಡು ಮರೆಯಾಗುತ್ತಾನಲ್ಲ ಅದಕ್ಕೆ ಅಪ್ಪನೇ ಬೇಕು . ತನ್ನ ಕಷ್ಟಗಳನ್ನು ಅಮ್ಮ ಕೂಗಾಡಿಕೊಳ್ಳಬಹುದು ಆದರೆ ಅಪ್ಪ ಎಂದೂ ಅವನ್ನು ಬಿಚ್ಚಿಡಲಾರ. ಮಕ್ಕಳನ್ನು ಪರಿಪೂರ್ಣವಾಗಿಸಲು ತಾನು ಪೂರ್ತಿ ಖಾಲಿಯಾಗಲು ಸಿದ್ದನಾಗುತ್ತಾನಲ್ಲ ಅದಕ್ಕೇ ಈ ಅಪ್ಪನ ಕುರಿತು ಬರೀಬೇಕು ಅನ್ನಿಸಿದ್ದು . ನಮ್ಮ ಎಲ್ಲ ಬೇಕುಗಳನ್ನೂ ಅಪ್ಪನೇ ಪೂರೈಸುತ್ತಾನಾದರೂ ಅವು ಅಮ್ಮನ  Recommandation  ನಿಂದಲೇ ಆಗುವುದರಿಂದಾಗಿ ಅಮ್ಮ ನಮ್ಮನ್ನು ಸಂವೇದನೆಗೊಳಪಡಿಸಿದಷ್ಟು ಈ ಅಪ್ಪ ಮಾಡಲಾರ . ಪ್ರಾಯಷ: ಇದಕ್ಕೆ ಇರಬೇಕು  Mother's Day  ಯಂದು ಬರುವ ವಿಶೇಷ ಲೆಖನಗಳು  Father's day  ಯಂದು ಯಾವ ಪತ್ರಿಕೆಗಳಲ್ಲೂ  ಇರೊಲ್ಲ . ಅಮ್ಮನ ಬಗ್ಗೆ ಬರಿ  Feminist  ಗಳಷ್ಟೇ ಅಲ್ಲ ಪುರುಷರೂ ಜಾಸ್ತಿ ಬರಿತಾರೆ .ಆದ್ರೆ ಅಪ್ಪ ಬರಹಕ್ಕೆ ದಕ್ಕಿರುವುದು ತೀರ ವಿರಳ . ಅಕಸ್ಮಾತ್ ದಕ್ಕಿದರೂ ಅಲ್ಲಿ ಅಪ್ಪನ ಸಿಟ್ಟು, ಸೆಡೆವು, ಒರಟುತನ, ಹಾದರ, ಮೂರ್ಖತನಗಳೆ ಬಿಂಬಿಸಲ್ಪಟ್ಟಿರುತ್ತವೆ. ಅಡುಗೆ ಮನೆಯ ಒಡತಿ ಅಮ್ಮನೇ ಆದರೂ ಅಪ್ಪನಿಗೆ ಅಕ್ಕಿ, ಬೇಳೆ , ಉಪ್ಪು , ಎಣ್ಣೆ , ಯಾವ್ಯಾವ ಡಬ್ಬದಲ್ಲಿವೆ , ಯಾವುದು ಖಾಲಿಯಾಗಿದೆ ಎಂಬುದರ ಸ್ಪಷ್ಟ ಮಾಹಿತಿ ಇರುತ್ತದೆ .

ಕೊನೆಯದಾಗಿ,ಅಪ್ಪನ ಬಗ್ಗೆ ಬರೆಯಲೇಬೇಕೆನಿಸಿದ್ದು ಏಕೆ ಎಂದು ಹೇಳಿ ಮುಗಿಸುತ್ತೇನೆ .ನನ್ನ ಕಂಪನೆಯಲ್ಲಿ " Family day "  ಇತ್ತೆಂದು ಅಪ್ಪ ಅಮ್ಮ ಬೆಂಗಳೂರಿಗೆ ಬಂದಿದ್ರು. ಒಂದು ವಾರ ಇಲ್ಲಿದ್ದರು. ಅಮ್ಮನ ಕೈಡುಗೆ ತಿಂದು ಆಫೀಸ್ ಗೆ ಹೊರಟು ನಿಂತಾಗ ಅಪ್ಪ ತನ್ನ ಅದೇ ಹಳೇ ವರಸೆಯಲ್ಲಿ " ದುಡ್ಡು ಐತೇನೋ ? ಕೊಡ್ಲಾ ? " ಅಂತ ಕೇಳ್ತಿದ್ರು . ಹಳ್ಳಿ ಶೈಲಿಗೆ ಹೊಂದಿಕೊಂಡಿರುವ ಅವರಿಗೆ ಈ ಬಿಂದಾಸ್ ಬೆಂಗಳೂರಿನ ಪ್ರತಿಯೊಂದು ವಿಶೇಷವಾಗಿಯೇ ಕಾಣಿಸುತಿತ್ತು . ಬಿ ಎಮ್ ಟಿ ಸಿ  ಬಸ್ ನಲ್ಲಿ ಅವರನ್ನು ಒಂದು ವಾರ ಸುತ್ತಾಡಿಸುವದರಲ್ಲಿ ಸಾಕಾಗಿಹೋಯ್ತು . ರೋಡ್ ಕ್ರಾಸ್ ಮಾಡುವಾಗ ಅಪ್ಪ ಅಮ್ಮನ ಕೈಯನ್ನು ಎಷ್ಟು ಬಿಗಿಯಾಗಿ ಹಿಡಿದಿರುತ್ತಿದ್ದರೆಂದರೆ , ಥೇಟ್ ಮದುವೆ ಮಂಟಪದಲ್ಲಿ ಹಿಡಿದಿರುವಂತೆ ಕಾಣುತ್ತಿತ್ತು. ಅದೆಂತಾ ಕಾಳಜಿ, ಭರವಸೆ ಆ ಹಿಡಿತದಲ್ಲಿತ್ತು !!

ಶಿವಮೊಗ್ಗಕ್ಕೆ ಹೊರಟುನಿಂತ ಟ್ರೈನಿ ನಲ್ಲಿ ಅಪ್ಪ-ಅಮ್ಮನನ್ನು ಬೀಳ್ಕೊಡುವಾಗ ಮಾತ್ರ ನನಗೇ ಗೊತ್ತಿಲ್ಲದೆ,ನಾನೂ ಅಪ್ಪನಂತೆ ವರ್ತಿಸಿಬಿಟ್ಟೆ. ಮನೆಯಲ್ಲೇ ಅಪ್ಪನಿಗೆ ದುಡ್ಡು ಕೊಟ್ಟಿದ್ದೆನಾದರೂ ATM ನಲ್ಲಿದ್ದ ಕೊನೆಯ 100  ರೂಪಾಯಿಯನ್ನು ತೆಗೆದುಕೊಂಡು ಬಂದು ಅಪ್ಪನ ಕೈಗಿತ್ತು "  salary  ಆದ ತಕ್ಷಣ ಮತ್ತೆ ಹಣ ಕಳಿಸ್ತೀನಪ್ಪ " ಎಂದೆ. ಆಗ ಕಾಲೇಜು ದಿನಗಳಲ್ಲಿ ನಾನು ನಮ್ಮೊರಿನ ಬಸ್ ಸ್ಟಾಪ್ ನಲ್ಲಿ ಕಾಯುತ್ತ ನಿಂತಾಗ  ಅಪ್ಪ ಕೊಡುತ್ತಿದ್ದ ಕೊನೆಯ 100  ರೂಪಾಯಿ ನೆನಪಾಯಿತು. ನಾವು ಎಷ್ಟೆ ಸಾವಿರ ಅಪ್ಪನಿಗೆ ಕೊಟ್ಟರೂ ಆ 100  ರೂಪಾಯಿಯ ಬೆಲೆಯೇ ಬೇರೆಯಲ್ಲವೆ ?

ಕೊನೆಮಾತು :
 June 19  ಭಾನುವಾರ " Father's day "  ಯಲ್ಲವೆ ಅದಕ್ಕೆ ಇಷ್ಟೆಲ್ಲ ನೆನಪಾಯಿತು . ನಿಜ ಹೇಳ್ಬೇಕಂದ್ರೆ ಅಮ್ಮನ ಬಗ್ಗೆ ನಾನೂ ಹತ್ತಾರು ಕವನ ಬರೆದಿದ್ದೆ. ಆದರೆ ನನ್ನ ಅಕ್ಷರ ಪ್ರೀತಿ ಅಪ್ಪನೆಡೆಗೆ ಹರಿದದ್ದು ಇದೇ ಮೊದಲು . ಸದ್ಯಕ್ಕೆ ನಾನು ಅಷ್ಟಾದರೂ ಋಣ ಕಡಿಮೆ ಮಾಡಿಕೊಂಡಿದೀನಿ. ಮತ್ತೆ ನೀವು ?? 



ನಿಮ್ಮವ,

ಶಿವಕುಮಾರ್ ಮಾವಲಿ .

Friday, March 18, 2011

ವಿಶ್ವ ಕನ್ನಡ ಸಮ್ಮೇಳನದಲ್ಲಿ ನಾನು ......

ಐತಿಹಾಸಿಕ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಮತ್ತು ಕೆಲವು ಕಾರ್ಯಕ್ರಮಗಳನ್ನು ನೀಡಲು ನನಗೆ 
ಶಿವಮೊಗ್ಗದ ನಮ್ಮ ಕಲಾ ತಂಡವಾದ " ಹೊಂಗಿರಣ" ದಿಂದಾಗಿ ಸಾಧ್ಯವಾಯಿತು .. ಈ ಸಮ್ಮೇಳನದಲ್ಲಿ ಭಾಗವಹಿಸಿದ್ದು 
ಹೆಮ್ಮೆಯ ಸಂಗತಿ .... ಮೂರು ದಿನ ಎಲ್ಲೆಲ್ಲೂ ಕನ್ನಡ .. ಕನ್ನಡ .. ಕನ್ನಡ ... ಗಡಿನಾಡಲ್ಲಿ ಕನ್ನಡದ ಕಂಪು ಪಸರಿಸಿದ ಈ ವೈಭವೋಪಿತ  ಹಬ್ಬದಲ್ಲಿ ಇದ್ದು , ಸಂಭ್ರಮಿಸಿದ್ದು ನನ್ನ ಪಾಲಿನ ಮಧುರ ಕ್ಷಣ ... ಈ ಕ್ಷಣದ ಕೆಲವು ಝಲಕುಗಳು ... .....















                                               ನಿಮ್ಮ ಶಿವೂ ....

Sunday, March 6, 2011

ಅದನ್ನೇಕೆ  "ಮರ್ಯಾದಾ ಹತ್ಯೆ" ಎನ್ನಬೇಕಲ್ಲವೇ  ????

ಅಂತೂ ಕೇವಲ ಉತ್ತರ ಭಾರತದಲ್ಲಿದ್ದ  ಆ ಮರ್ಯಾದಾ ಹತ್ಯೆ ಎಂಬ ಪಿಡುಗು ಕರ್ನಾಟಕಕ್ಕೂ ನುಗ್ಗಿಬಿಟ್ಟಿದೆ.
ಕನಕಪುರದಲ್ಲಿ ಪ್ರೀತಿಸಿ ಮದುವೆಯಾಗಿದ್ದ ಹುಡುಗಿಯೊಬ್ಬಳನ್ನು ಜನ್ಮ ಕೊಟ್ಟ ತಂದೆ ತಾಯಿಗಳೇ ಇಟ್ಟಿಗೆಯಿಂದಹೊಡೆದು ,ಜಜ್ಜಿ ಜಜ್ಜಿ ಸಾಯಿಸಿದ್ದಾರೆ . ಅದೂ ಅವಳ ಹಸುಳೆ ಕಂದಮ್ಮನನ್ನೂ  ಸೇರಿಸಿ ಕೊಂದುಹಾಕಿದ್ದಾರೆ .ಕೇವಲ ಜಾತಿಯ ನೆಪದಲ್ಲಿ ಹೆತ್ತ ಮಗಳನ್ನೂ ಮೊಮ್ಮಗನನ್ನೂ ಕೊಂದ ಪಾತಕಿಗಳ ಈ ಕೃತ್ಯವನ್ನು ಮಾಧ್ಯಮಗಳು" ಮರ್ಯಾದಾ ಹತ್ಯೆ " ಎಂದು ಕರೆಯುತ್ತಿವೆ ... ಯಾವ ಮರ್ಯಾದೆ ? ಯಾರ ಮರ್ಯಾದೆ ಉಳಿಯಿತು ಈ ಹತ್ಯೆಯಿಂದ ?ಮಾತೆತ್ತಿದರೆ ೨೧ನೇ  ಶತಮಾನ , ವೈಜ್ಞಾನಿಕತೆ , ತಾಂತ್ರಿಕತೆ ಅಂತೆಲ್ಲ ಮಾತಾಡುವಾಗ ಇದೇನು ಮರ್ಯಾದೆ ಗಾಗಿ ಮಾಡಿದ ಹತ್ಯೆಯಾ ? ಮೂರೂ ಬಿಟ್ಟವರೇ ಇಂತ  ಕುಕೃತ್ಯಕ್ಕೆ ಕೈ ಹಾಕುತ್ತಾರಷ್ಟೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಪರಿಹಾರ ಹುಡುಕಬೇಕಿದೆ . " ನಿಮಗೆ ಸಾಯುತ್ತಿರುವ ಒಂದು ಜೀವವನ್ನು ಉಳಿಸುವ ಶಕ್ತಿ ಇಲ್ಲ ಅನ್ನುವುದಾದರೆ , ಒಂದು ಜೀವವನ್ನು ಕೊಲ್ಲಲು ಹಕ್ಕು ಎಲ್ಲಿಂದ ಬಂತು ?"  ಜನ್ಮ ಕೊಟ್ಟ ಮಾತ್ರಕ್ಕೆ ನೀವು ಆ ಜೀವಗಳನ್ನು ಹೇಗೆ ಇಲ್ಲವಾಗಿಸಬಹುದು???  ಪ್ರೀತಿಸಿದವರನ್ನು ನಿಮಗೆ ಒಪ್ಪಿಕೊಳ್ಳಲು ಆಗದಿದ್ದರೆ,ನಿಮ್ಮ ಜಾತಿ ಅಂತಸ್ತುಗಳೇ ನಿಮಗೆ  ಹೆಚ್ಚಾದರೆ, ಅವರನ್ನು ಅವರಷ್ಟಕ್ಕೆ ಬಿಟ್ಟುಬಿಡಿ ... ಇದನ್ನು " ಅಮಾನವೀಯ ಹತ್ಯೆ " ಎನ್ನಬಹುದೇ ಹೊರತು ' ಮರ್ಯಾದ ಹತ್ಯೆ ' ಎಂದಲ್ಲ .ರಾಜಕಾರಣಿಗಳು ಈ ವಿಷಯವನ್ನು ಜಾತಿ ಆಧಾರಿತ ವೋಟುಗಳ  ವಿಷಯಕ್ಕೆ ಬಳಸಿಕೊಳ್ಳದೆ , ಸೂಕ್ತ ಕ್ರಮ ಕೈಗೊಳ್ಳಬೇಕಿದೆ ."ಕೊಂದವರು ಉಳಿದರೆ ಕೂಡಲ ಸಂಗಮ ? " ಎನ್ನುವಂತೆ , ಪಾತಕಿಗಳು ಸಾಕಷ್ಟಿರುವ ಈ ಸಮಾಜಕ್ಕೆ ಹೆತ್ತವರೇ , ನಮ್ಮವರೇ ನಮ್ಮನ್ನು ಕೊಲ್ಲಲು ತಯಾರಾಗುವ ಈ " HONOR KILLING "  ಬೇಡವೇ ಬೇಡ . ಈ ಕೊಲೆಯಿಂದ ಯಾರ  honor ಕೂಡ ಹೆಚ್ಚುವುದಿಲ್ಲ . ನಮ್ಮಲ್ಲಿನ ದಾನವತ್ವ ಪ್ರದರ್ಶನವಾಗುತ್ತದೆ ಅಷ್ಟೆ. ಬನ್ನಿ ಒಟ್ಟಾಗಿ ಹೇಳೋಣ : ' ಇದು  Honor- Killing ಅಲ್ಲ ಬದಲಾಗಿ Inhumane -Killing " .. ಬದುಕುವ ಹಕ್ಕಿಗೆ  ರಕ್ಷಣೆ  ಕೊಡುವವರು ಯಾರು ? ಧಿಕ್ಕಾರವಿರಲಿ ನಿಮ್ಮ ಜಾತಿ -ಅಂತಸ್ತು ಗಳ ಕಲ್ಪನೆಗೆ .!! ಬದಲಾಗುವ ಕಾಲದ  ನಿರಂತರತೆಗೆ ಹೊಂದುವ  ಮನಸ್ಸು ನಿಮ್ಮದಾಗಲಿ .. ದೇವರೆಂಬ ಶಕ್ತಿ ,ಪ್ರಾಣಿ ,ಮನುಷ್ಯ ,ವಸ್ತು ,ಕಲ್ಪನೆ ಇರುವುದೇ ನಿಜವಾದರೆ , ಈ Killer ಗಳ ಮನ ಪರಿವರ್ತನೆಯಾಗಲಿ ... ಜೊತೆಯಲ್ಲಿ ಬದುಕಿ .ಸಾಧ್ಯವಾಗಲಿಲ್ಲವಾ ಬದುಕಲು ಬಿಟ್ಟುಬಿಡಿ ...

ನಿಮ್ಮವ ,

ಶಿವೂ

Sunday, January 23, 2011

ಹೌದೂ, ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....???

        ಹೌದೂ,  ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....???

      ಹೊರಗೆ ಉರಿಯುವ ಬಿಸಿಲು .ಮನದೊಳಗೆ ಆತಂಕ.ತೆರೆಯದೇ ಇಟ್ಟ ಪುಸ್ತಕಗಳಿಗಾಗಿ ಹುಡುಕಾಟ. ಇವು ವರ್ಷಾಂತ್ಯದ ಪರೀಕ್ಷೆಗಳು ಹತ್ತಿರ ಬರುತ್ತಿರುವುದರ ಲಕ್ಷಣಗಳು. ವರ್ಷವಿಡೀ ತೋರದ ಕಾಳಜಿ ಮತ್ತು ಜವಬ್ದಾರಿಗಳು ವಿದ್ಯಾರ್ತಿಗಳಿಗೆ  ಈ ಸಮಯದಲ್ಲಿ ಮೈಗೂಡಿಬಿಡುತ್ತದೆ.ಈ ಸಮಯದಲ್ಲಿ ಅವರು ತಮ್ಮ ನೋಟ್ಸ್ ಬುಕ್ ಮತ್ತು study material ಗಳ ಹುಡುಕಾಟಕ್ಕಿಂತ  ವಿಶಿಷ್ಟವಾಗಿ ಗಮನಿಸಬೇಕಾದ್ದು, " ಆಟೋಗ್ರಾಫ್ ಬರೆಸಲು" ಅವರು ಹಂಬಲಿಸುವ ಪರಿ. ಕಾರಿಡಾರ್ ಮೇಲೆ ಓಡಾಡುವವರೆಲ್ಲರ ಕೈಯಲ್ಲೊಂದು ಪುಟ್ಟ ಆಟೋಗ್ರಾಫ್ ಇರುತ್ತದೆ. ತಮಗಿಷ್ಟವಾದ ಗುರುಗಳ,ಗೆಳೆಯರ., ಗೆಳತಿಯರಿಂದ ತಮ್ಮ ಬಗ್ಗೆ ಒಂದಿಷ್ಟು ಬರೆಸಿಕೊಳ್ಳಲು ಎಲ್ಲರೂ ಕಾತರದಿಂದ ಕಾದಿರುತ್ತಾರೆ. ಅರ್ಧ ಟೀ ಕುಡಿಯಲು ಸಹ ಚೌಕಾಸಿ ಮಾಡುವವ 50 ರೂಪಾಯಿ ಕೊಟ್ಟು ಹಸ್ತಾಕ್ಷರದ ಪುಟ್ಟ ಪುಸ್ತಕವನ್ನು ಕೊಂಡಿರುತ್ತಾನೆ. ಕಾಲೇಜ್ ದಿನಗಳಲ್ಲಿ ಒಮ್ಮೆಯೂ ಮಾತನಾಡದವರೂ ಕೂಡ ಈ ಆಟೋಗ್ರಾಫ್ ನಲ್ಲಿ "ಆತ್ಮೀಯ ಗೆಳೆಯ(ತಿ) ರಾಗಿರುತ್ತಾರೆ. ಅಲ್ಲಿ ನಮಗೊಂದಿಷ್ಟು ಪುಕ್ಕಟೆ ಸಲಹೆಗಳು,ನಮ್ಮ ಬಗ್ಗೆ ಮುಜುಗರ ತರಿಸುವಂತ ಕಾಂಪ್ಲಿಮೆಂಟ್ ಗಳು, ಜೀವನದ ಬಗ್ಗೆ ದೊಡ್ಡ ದೊಡ್ಡ ವ್ಯಾಖ್ಹ್ಯಾನಗಳು, ಫಿಲಾಸಫಿ ಗಳು, ನಮ್ಮ ಮಿತ್ರರ ಅತೀ personal ಅಭಿರುಚಿಗಳು ಮತ್ತು ಎಂದೋ ಕೊಟ್ಟ ನೋವಿಗೆ ಕೇಳುವ Sorry ಗಳು ಸಿಗುತ್ತವೆ. ನಮ್ಮ ಗುರುಗಳಾದವರು ನಮಗೊಂದಿಷ್ಟು ನುಡಿಮುತ್ತುಗಳನ್ನು ಬರೆದರೆ, ನಮ್ಮ ಆಪ್ತ ಸ್ನೇಹಿತರು ನಮ್ಮ  ವ್ಯಕ್ತಿತ್ವವನ್ನು ಸೆರೆಹಿಡಿಯುವಂತ ಬರಹಗಳನ್ನು ಬಿಂಬಿಸುತ್ತಾರೆ. ದಿಸೆಂಬರ್ ,ಜನವರಿ ನಂತರ ಡಿಗ್ರಿ ವಿದ್ಯಾಥಿಗಳು  ಕ್ಲಾಸ್ ರೂಮ್ ನತ್ತ ಸುಳಿಯುವುದಿಲ್ಲವಾದರೂ , ಕೈಲ್ಲೊಂದು ಚಿಕ್ಕ ಆಟೋಗ್ರಾಫ್ ಹಿಡಿದು ಕ್ಯಾಂಪಸ್ ನಲ್ಲಿ ಅಲೆದಾಡುವುದು ಸಾಮಾನ್ಯವಾಗಿರುತ್ತದೆ.  ಕೆಲವೊಮ್ಮೆ " Regularly irregular" ಸ್ಟೂಡೆಂಟ್ ಗಳೂ ಸಹ ಈ ಆಟೋಗ್ರಾಫ್ ಬರೆಯಲು ಕೊಟ್ಟಾಗ ,'ಇವನು ನಮ್ಮ ಕ್ಲಾಸ್ ಮೇಟ್ ಆಗಿದ್ನಾ? ' ಎಂಬ ಗೊಂದಲವೂ ಉಂಟಾಗುತ್ತದೆ.
      ಹೌದೂ ಹಾಗಾದರೆ ನಾವೇಕೆ ಆಟೋಗ್ರಾಫ್ ಬರೆಸುತ್ತೇವೆ ....??  ಒಂದೇ ಮಾತಿನಲ್ಲಿ ಹೇಳುವುದಾದರೆ ನಮ್ಮನ್ನು      ಬೇರೆಯವರಿಂದ ಹೊಗಳಿಸಿಕೊಳ್ಳಲು.ನಿಜವಾಗಿಯೂ ಆಟೋಗ್ರಾಫ್ ಗಳು ನಮ್ಮ personality ಯನ್ನ ಯತಾವತ್ತಾಗಿ  ಸೆರೆಹಿಡಿಯಲಾರವು.  ಅದೇಕೊ ಅವು ಬರಿ ಪ್ರಶಂಸೆಗೇ ಜೋತುಬಿದ್ದಿರುತ್ತವೆ. ಅಗಲಿಕೆಯ ಹೊಸ್ತಿಲಲ್ಲಿ ಎಣ್ಣೆ ಸೀಗೆಕಾಯಂತೆ ಇದ್ದವರಲ್ಲೂ ಕೂಡ ಮೈತ್ರಿ ಭಾವನೆ ಮೂಡಿಬಿಡುತ್ತದೆ. ' ನನ್ನ ಮೈಯ ರಕ್ತ ಕೆಂಪಾಗಿರುವ ವರೆಗೊ ನಿನ್ನ ಮರೆಯಲಾರೆ ಮಿತ್ರ' ಎಂದು ಗೆಳೆಯನೊಬ್ಬ ಬರೆದುಬಿಟ್ಟಿದ್ದನೆಂದರೆ,ಎಂತಾ ಖುಷಿಯಾಗಬಹುದು??,ನಮ್ಮ ಬಗ್ಗೆ ಇತರರು ಬರೆದ ಪ್ರಶಂಸನೀಯ ಪದಪುಂಜಗಳು ನಮಗೇ ಮುಜುಗರವುಂಟು ಮಾಡುವಂತಿದ್ದರೂ ಮೂಕರಾಗಿ ಅವನ್ನೆಲ್ಲ ಒಪ್ಪಿಕೊಂಡುಬಿಡುತ್ತೇವೆ.ಅಲ್ಲಿ ಕೆಲವರಂತೂ ನಮ್ಮ ನಿರೆಕ್ಷೆಗೂ ಮೀರಿ ನಮ್ಮನ್ನು ಹಚ್ಛಿಕೊಂಡಿರುತ್ತಾರೆ.ಅವರ ಭಾವನೆಗಳ 'overflow'  ಹಾಳೆಗಳ ಮೇಲಾಗುತ್ತದೆ. " ಊರು ದೂರವಿದ್ದರೊ ಮನಸ್ಸು ಹತ್ತಿರವಿರಲಿ " ಎಂದು ಗೆಳೆಯ(ತಿ) ಬರೆದರೆ ಅದೆಂತ ಮಧುರ ಯಾತನೆಯಲ್ಲವಾ! ಮತ್ತೊಬ್ಬಳು ಗೆಳತಿ ಬರೆದಿರುತ್ತಾಳೆ, ' ಒಮ್ಮೆ ಕಟ್ಟಿದ ಸರಪಣಿಯನ್ನು ಎಂದೂ ಕತ್ತರಿಸದಿರು ಗೆಳೆಯ' ಎಂದು. ಆಟೋ ಗ್ರಾಫ್ ಗಳಲ್ಲಿ ಅದುವರೆಗೂ ಬಾಯಿಬಿಟ್ಟು ಹೇಳಲಾಗದ ಪ್ರೀತಿಯನ್ನು ಒಂದೆ ಸಾಲಿನಲ್ಲಿ ಬರೆದುಬಿಡಬಹುದು. ' ದೂರದೂರಿನಲ್ಲಿರುವ ಮಗುವನ್ನು ತಾಯಿ ಪ್ರೀತಿಸಿದಂತೆ ನಿನ್ನ ನನ್ನ ಸ್ನೆಹ ಕಣೋ,ಪ್ಲೀಸ್ ಮರೆಯದಿರು ಈ ಕನಸಿನ ಬಡವಿಯನ್ನು' ಎಂಬ ಸಾಲಿನಲ್ಲಿ ಗೌಪ್ಯವಾಗಿಟ್ಟ  ಪ್ರೀತಿಯಿಲ್ಲವೆ??. ಹಾಗೆ ತೀರ ಹತ್ತಿರದ ಮಿತ್ರನೊಬ್ಬ ಬರೆಯುತ್ತಾನೆ -" ಲೇ ನಾನೂ ಬರೀಬೇಕೆನೊ, ಹೇಳುವುದು , ಬರೆಯುವುದು, ಕೇಳುವುದನ್ನು ಮೀರಿದ್ದೂ ಒಂದು ಇದೆಯಲ್ಲ. ಅದು ನಮ್ಮಿಬ್ಬರಿಗೂ ಗೊತ್ತು. ಅದನ್ನು ಕೊನೆವರೆಗೂ ಜತನದಿಂದ ಕಾಪಾಡೋಣ". ಹೀಗೆ ಆಟೋಗ್ರಾಫ್ ತೀರಾ ಸಾಮಾನ್ಯರನ್ನೊ ಕವಿಯಾಗಿಸುತ್ತದೆ,ತತ್ವಜ್ನಾನಿಯಾಗಿಸುತ್ತದೆ. ಅಂದಹಾಗೆ SLAM BOOK ಗಳಲ್ಲಿ ಬರೆಸುವ ಆಟೋಗ್ರಾಫ್ ಗಳಲ್ಲಿ ಈ ಥ್ರಿಲ್ ಇರುವುದಿಲ್ಲ. ಅವು ಒಂತರ bio data information ಗಳಿದ್ದಂತೆ. ಡೈರಿ ಅಥವ ಅದೆಕ್ಕೆಂದೆ ಮೀಸಲಿಟ್ಟ ಬುಕ್ ಗಳಲ್ಲಿ ಮಾತ್ರ ಈ ಹಿತಾನುಭವ ಸಿಗುತ್ತದೆ.

ಒಂದೇ ಮಾತಿನಲ್ಲಿ ಹೇಳುವುದಾದರೆ, ಆಟೋಗ್ರಾಫ್ ಗಳು ಸಿಪ್ಪೆ ಸುಲಿದಿಟ್ಟ ಬಾಳೆಹಣ್ಣಿನಂತೆ . ನೋಡುತ್ತ ಕೂತರೆ ರುಚಿ ಸವಿಯಲಾಗದು. ಅವನ್ನು ಓದಿಯೇ ಅನಿಭವಿಸಬೇಕು. ಮುಂದೆಂದೋ ನೀವು ದೊಡ್ಡದೊಂದು ಹುದ್ದೆಯಲ್ಲಿದ್ದಾಗಲೋ, ಬದುಕಿನ ವಿಚಿತ್ರ ತಿರುವುಗಳಲ್ಲಿ ಸಿಕ್ಕು ಸೀರುಂಡೆಯಾದಾಗಲೋ,ನಿಮ್ಮ ಮಗನನ್ನು ಕಾಲೆಜ್ ಗೆ ಸೇರಿಸಲು ಹೋದಾಗ ನಿಮ್ಮ ಕಾಲೇಜ್ ದಿನಗಳು ನೆನಪಾದಾಗಲೋ, ನೀವು ಅಂದುಕೊಂಡಷ್ಟು ಪ್ರೀತಿಸುವ ಸಂಗಾತಿ ಸಿಗದಿದ್ದಾಗಲೋ,ಇನ್ನೇನು ಮುಪ್ಪು ಬಂದೇಬಿಟ್ಟಿತು ಎನ್ನುವ ಕಾಲದಲ್ಲೋ ಅಥವ ಪ್ರೀತಿಸಿ ಕೈಕೊಟ್ಟವ(ನ)ಳ ಹೆಸರನ್ನು ನಿಮ್ಮ ಕಂದಮ್ಮನಿಗೆ ಇಡುವ ಸಮಯ ಬಂದಾಗಲೋ, ನೀವು ಈ ವರೆಗೆ ಬರೆಸಿಟ್ಟ ಆಟೋಗ್ರಾಫ್ ಪುಟಗಳನ್ನು ರಾತ್ರಿ ಮಲಗುವ ಮುನ್ನ ಕದ್ದು ತಗೆಯಿರಿ. ( ಆಗ ಕದ್ದೇ ಓದಬೇಕಾದ ಸ್ತಿತಿ ನಿಮ್ಮದು) ಏಕಾಂತದಲ್ಲಿ ,ಆ ರಾತ್ರಿಯ ನೀರವತೆಯಲ್ಲಿ ಓದಿ. ಒಂದೇ ಉಸಿರಿಗೆ ಎಲ್ಲ ಪುಟಗಳನ್ನೂ ಒದಿ ಮುಗಿಸಿಬಿಡುತ್ತೀರಿ.... ಆಗ ನೀವು " Bliss of Solitude " ಅಂತ ವರ್ಡ್ಸ್ವರ್ತ್ ಕವಿ ಹೇಳುವ ಪರಮಾನಂದದ ಸ್ತಿತಿಯಲ್ಲಿರುತೀರಿ. Can you try that ??


                                                                                      @ ಶಿವಕುಮಾರ್ ಮಾವಲಿ@

Wednesday, January 19, 2011

ಅಮ್ಮ ನೀ ನೆನಪಾಗುತ್ತೀ .....

                     ಅಮ್ಮ  ನೀ ನೆನಪಾಗುತ್ತೀ .....

                     ಅಮ್ಮ  ನೀ ನೆನಪಾಗುತ್ತೀ .....
                     ಮಹಿಳಾ ಮೀಸಲಾತಿ ವಿರುದ್ಧ ನಾ 
                     ಭಾಷಣ ಬಿಗಿಯುವಾಗಲೆಲ್ಲ ;
                    ಸ್ತ್ರೀ-ಶೋಷಣೆಗೆ ಗಂಡಸು ಮಾತ್ರ 
                    ಕಾರಣವಲ್ಲ  ಎಂದು ನಾ ಅಬ್ಬರಿಸುವಾಗಲೆಲ್ಲ ;

                    ಅಮ್ಮ  ನೀ ನೆನಪಾಗುತ್ತೀ .....      
                    ಆತ್ಮೀಯ ಗೆಳತಿ ತೋರಿಸುತ್ತಿದ್ದ 
                    ಪ್ರೀತಿ ಇನ್ನಿಲ್ಲದಾದಾಗ ;
                   ಬಸ್ ನಲ್ಲೊಬ್ಬಳು ಚಿಲ್ಲರೆ ತೆಗೆಯಲು 
                   ಬಾಗಿದ್ದಕ್ಕೆ ಸೆರಗು ಜಾರಿದಾಗ ;

                  ಅಮ್ಮ  ನೀ ನೆನಪಾಗುತ್ತೀ .....                    
                  ಬಿಕನಿಯಲ್ಲೇ ಬೀದಿಗೆ ಬಂದು
                  ನರ್ತಿಸುವವರ  ಕಂಡಾಗ ;
                 ಮಜೆಸ್ಟಿಕ್ ಬಳಿಯ ಹೆಣ್ಣೊಂದು 
                 ಹಣೆಯಿಂದಲೇ ಸಿಗ್ನಲ್ ಕೊಟ್ಟು ಕರೆದಾಗ ;

                 ಹೀಗೆ 'ಸ್ತ್ರೀ ' ಎಂಬ ರೂಪಕ   
                ಕೇಳಿದಾಗ ಮತ್ತೆ ನೋಡಿದಾಗ      
                ನೀನೆ ಕಣ್ಮುಂದೆ ನಿಲ್ಲುತ್ತೀಯಮ್ಮ .

                ಅಂದ ಹಾಗೆ, ಮೊನ್ನೆ ನಾನು ರಜೆಯಲ್ಲಿ 
                ಊರಿಗೆ ಬಂದಾಗ ನೀ ಹುಡುಕುತ್ತಿದ್ದ ,
                ನಮ್ಮನೆಯ 'ಕ್ಷೀರಮೂಲ ' ಗೌರಿ ಸಿಕ್ಕಳೆ ? 
               ಯಾರ ತೋಟಕ್ಕೆ, ಕದ್ದು ಮೇಯಲು ಹೋಗಿದ್ದಳವಳು ?
               ಅಪ್ಪನಿಂದ ನಿನಗೆ ಬೈಸಲಿಕ್ಕೆ !
  
               ಗೌರಿ ಯಂತ ಹಸು ಕಳೆದು ಹೋದ  ದಿನ
              ನೀ ಊಟ-ತಿಂಡಿ ,ನೀರು ಕೂಡ ಮುಟ್ಟಿರಲಿಲ್ಲವಲ್ಲ,
              ಹಾಗಾಗಿಯೇ  ನಿನ್ನ ನೆನಪು 
              ನನಗೆ ಮತ್ತೆ ಮತ್ತೆ ಕಾಡುತ್ತದೆ ಅಮ್ಮ .

                        @ ಶಿವಕುಮಾರ್ ಮಾವಲಿ@

Monday, December 27, 2010

ಹೀಗೊಂದು" HOME ALONE" ಅನುಭವ !!!!!!!



ಕೆಲವೊಂದು ವೀಕೆಂಡ್ ಹಾಗೆ ಅನ್ನಿಸುತ್ತದೆ . ಯಾವ ಫ್ರೆಂಡ್ಸ್ ಬೇಡ , ಸಿನಿಮಾ ಬೇಡ ,ಪಾರ್ಟಿ ಬೇಡ ,ಯಾರು ನಮ್ಮನ್ನಎಲ್ಲಿಗೂ ಕರೆಯದಿದ್ದರೆ ಸಾಕಪ್ಪ ಅಂತಾ .ಅದ್ಯಾರೋ ಕವಿ ಮಹಾಶಯ ಇದನ್ನೇ ಇರಬೇಕು "  Lonliness is a bliss "ಅಂತಾ ಹೇಳಿದ್ದು. ಹಾಗೊಂದು ದಿನ ಪೂರ್ತಿ ಅಕ್ಷರಶಃ ಮನೆಯಿಂದ ಒಂದು ಹೆಜ್ಜೆ ಕೂಡ ಹೊರಗೆ ಇಡದೇ ಕಳೆದದ್ದು ಏನೋಒಂಥರ ವಿಚಿತ್ರ ಅನುಭವ. ಈ ದಿನ ಬೆಳಗ್ಗೆ ಮನೆಯವರೆಲ್ಲ ತಂತಮ್ಮ  (ಅ)ಕಾರ್ಯಗಳಿಗೆ ಹೋದಮೇಲೆ ಎಲ್ಲ ಕಿಡಕಿ ಬಾಗಿಲುಮುಚ್ಚಿ  ಒಬ್ಬನೇ ಮನೆಯಲ್ಲಿ ಉಳಿಯುವಂತ ಅವಕಾಶ ಸಿಕ್ಕಿತ್ತು . ಅಬ್ಬಾ! ಮನೆ ಪೂರ್ತಿ ನಂದೆ . ನಿಜ ಹೇಳಬೇಕೆಂದರೆ ನಾನುನೂರಾರು ಜನರ ಹಿಂಡಿನಲ್ಲಿ ಎಷ್ಟು Jolly ಆಗಿ ಇರಬಲ್ಲೇನೋ ಅಷ್ಟೇ ಕುಶಿಯಾಗಿ ಏಕಾಂಗಿಯಾಗಿ ಇರಬಲ್ಲೆ ಎಂಬೊಂದು ಸತ್ಯಗೊತ್ತಾಗಿದ್ದು ಇವತ್ತೇ .ಏನೋ ಒಂದು ತಿಂಡಿ ಮಾಡ್ಕೊಂಡ್ ತಿಂದು , TV ಮುಂದೆ ಕೂತವನು ಜಪ್ಪಯ್ಯ ಅಂದ್ರೂ ಮೇಲೇಳಲಿಲ್ಲ .ಮನಸ್ಸು ಬದಲಾದಂತೆ ಚಾನೆಲ್ change ಮಾಡುತ್ತ, ನ್ಯೂಸ್ ಪೇಪರ್ ಓದಿದೆ.ಬಹುದಿನಗಳ ನಂತರ TV ಲಿ ಫಿಲಂ ನೋಡಿದೆ. ಆದರೆ ಫಿಲಂ ನಲ್ಲಿ ಬರುವ ನವರಸಗಳಿಗೂ ಮುಲಾಜಿಲ್ಲದೆ ಸ್ಪಂದಿಸುವ ಅವಕಾಶ ಸಿಕ್ಕಿದು ಮಾತ್ರ ಇವತ್ತೇ . ಏನೋ ಗೊತ್ತಿಲ್ಲ ಎಲ್ಲರೂ ಇದ್ದಾಗ ಹಾಸ್ಯವು ನಗುತರಿಸುವುದಿಲ್ಲ , ತೀರ ದುಃಖದ ಸನ್ನಿವೇಶವೂ ನಮ್ಮ ಕಣ್ಣಲ್ಲಿನ ಹನಿಯನ್ನು ಬಿಗಿಯಾಗಿ ಹಿಡಿದುಬಿಡುತ್ತದೆ. ಆದರೆ ಈ ದಿನ ಹಾಗಲ್ಲ , "ಈ ಬಂಧನ " ಫಿಲಂ ನೋಡುವಾಗ ಕಣ್ನೀರಿತ್ತಿದ್ದೇನೆ,ಕಾಮಿಡಿ ಟೈಮ್ ನೋಡಿ ಹೊಟ್ಟೆ ಹಿಡಿಯುವಂತೆ ನಕ್ಕುಬಿಟ್ಟಿದ್ದೇನೆ, B4U ಚಾನೆಲ್ ಹಾಕಿಕೊಂಡು ಮೈ ಮನ ಬಿಚ್ಹಿ ಕುಣಿದಾಡಿದ್ದೇನೆ. Times Now ನ' ಅರ್ನಬ್ ಗೋಸ್ವಾಮಿ ' ಯ ವಾಕ್  ಚತುರತೆಗೆ ಚಪ್ಪಾಳೆ ತಟ್ಟಿದ್ದೇನೆ. ಎಷ್ಟೇ JOVIAL ಆಗಿರೋ ಮನುಷ್ಯ ಕೂಡ ಎಲ್ಲರೂ ಇದ್ದಾಗ ಬಚ್ಚಿಡಬೇಕಾದ ಎಲ್ಲ ಭಾವಗಳನ್ನು ಈ ಲೋನ್ಲಿನೆಸ್ ನಲ್ಲಿ ವ್ಯಕ್ತಪಡಿಸುತ್ತಾ ಹಾಯಾಗಿ ಕಳೆದ ಕುಶಿ ನನಗೆ . ಆದರೆ ಏಕಾಂತದಲ್ಲಿ ಮಾತಾಡಬಹುದಾದ ಗೆಳತಿಯೊಂದಿಗೆ ಮಾತ್ರ ಮಾತಾಡಲಾಗಲಿಲ್ಲ . ( ಅದಕ್ಕೆ ಬೇಸರವೂ ಆಗಲಿಲ್ಲವಲ್ಲ ಎಂಬುದು ವಿಶೇಷ ) . ಕೊನೆಯಲ್ಲಿ ರೂಂ ಪೂರ್ತಿ ಕತ್ತಲು ಮಾಡಿಕೊಂಡು ಹಗಲಿನಲ್ಲಿ ,ಈ ಚಳಿಯಲ್ಲಿ ರಗ್ ಹೊದ್ದು ಮಲಗುವುದಿದೆಯಲ್ಲ , ಅದನ್ನ ಅನುಭವಿಯೇ ತೀರಬೇಕು ಅಲ್ವೇ ?? .  ಇದಾದಮೇಲೆ evening walk ಹೋಗಿ ರೋಡ್ ಸೈಡ್ ಲ್ಲಿ ' ಪಾನಿಪುರಿ ' ತಿಂದು ಬಂದೆ ನೋಡಿ ,ಅಲ್ಲಿಗೆ ಇದೊಂದು ಪಕ್ಕಾ 'ಸ್ಪೆಷಲ್ ಡೇ " ಆಗೆಬಿಟ್ಟಿತು. ಕೆಲವೊಮ್ಮೆ ಎಲ್ಲರೂ ಇದ್ದು ಲೋನ್ಲಿ ಅನ್ನಿಸಿರುತ್ತದೆ ಆದರೆ ಈ ದಿನ ಏಕಾಂಗಿ ಯಾಗಿದ್ದ  ದಿನ ಕೊಟ್ಟ ಕುಶಿ ಮಾತ್ರ Unforgettable . ಅದೇ ಔಟಿಂಗ್ , ಪಾರ್ಟಿ, ಡಿಜೆ , ಬೂಜ್ , ಸಿನಿಮಾ , ನಾಟಕ , ಪಬ್ಬು , ಬಾರ್ , ಕಾಫಿ ಡೇ, ಸರಸ ,ಪ್ರೀತಿ-ಪ್ರೇಮ . ಕಾಮ. ಕರ್ಮ- ಈ ಎಲ್ಲ ಸಂಗತಿಗಳನ್ನು ಹೊರತಾಗಿಯೂ ಇಂತ ಸಂಭ್ರಮವೊಂದು ನನಗೆ ನನ್ನಿಂದಲೇ ಸಿಗಬಹುದು ಅಂತ ಗೊತ್ತಾದ ಈ ದಿನಕ್ಕೆ ನನ್ನ ಅಭಿನಂದನೆಗಳು ...ಅದಕ್ಕಾಗೆ ಅನ್ನಿಸುತ್ತೆ " learn to spend your personal time for yourself " ಅಂತ ಹೇಳಿರೋದು . ಅದೇನೇ ಇರಲಿ ನಾನಂತೂ ಮತ್ತೊಂದು ಅಂತಾ ದಿನಕ್ಕಾಗಿ ಕಾಯ್ತಾ ಇರ್ತೀನಿ ....... ನೀವು try ಮಾಡಿ , ಸುಳ್ಳಾದರೆ ಆಮೇಲೆ ನನಗೆ ಹೇಳ್ರಿ . ಏನಂತೀರಿ ???
ಏನಂತೀರಿ ????????


                                                                    @ ಶಿವೂ @

Wednesday, December 22, 2010

When he retires from cricket, .........!!!!

Let Him Play as long as he wants .........

" I know him, he is is not after the records but they do. I still remember how sad he was when India lost a test match in Chennai.1989 against Pakistan though he hits a tremendous century. Me and Waqar always wanted to bowl him because it was a prized wicket for us . When he hit his 50th test ton, at the age of 37, it shows the commitment and passion he has towards cricket and am sure it will continue as long as he plays cricket. He is not only a good cricketer but a gentle human being. For all those who says he plays for records, I have to tell them that " hey common people grow up understand cricket better. because if he would have been not played such innings India would have been beaten even worst". 

If  we see the pace he is going at the age of 37,sure we have yet more things to come upon to admire this superb Player. So  I request Indian cricket committee and selection board that please please please don't tell him to retire.
Let him play as long as he wants........... and  I am very sure that He will make an exuberant exit with honor and pride when he wishes to move ....

I must say this ." When this man exits from the world of cricket , the game of cricket will lose lots of it's fans...


( This is  the summary of what Wassim Akram ,former skipper of Pakistan opined on "THE GOD OF CRICKET ")


" GO SACHIN .... GO CRICKET..... GO INDIA .... "