Monday, December 27, 2010

ಹೀಗೊಂದು" HOME ALONE" ಅನುಭವ !!!!!!!



ಕೆಲವೊಂದು ವೀಕೆಂಡ್ ಹಾಗೆ ಅನ್ನಿಸುತ್ತದೆ . ಯಾವ ಫ್ರೆಂಡ್ಸ್ ಬೇಡ , ಸಿನಿಮಾ ಬೇಡ ,ಪಾರ್ಟಿ ಬೇಡ ,ಯಾರು ನಮ್ಮನ್ನಎಲ್ಲಿಗೂ ಕರೆಯದಿದ್ದರೆ ಸಾಕಪ್ಪ ಅಂತಾ .ಅದ್ಯಾರೋ ಕವಿ ಮಹಾಶಯ ಇದನ್ನೇ ಇರಬೇಕು "  Lonliness is a bliss "ಅಂತಾ ಹೇಳಿದ್ದು. ಹಾಗೊಂದು ದಿನ ಪೂರ್ತಿ ಅಕ್ಷರಶಃ ಮನೆಯಿಂದ ಒಂದು ಹೆಜ್ಜೆ ಕೂಡ ಹೊರಗೆ ಇಡದೇ ಕಳೆದದ್ದು ಏನೋಒಂಥರ ವಿಚಿತ್ರ ಅನುಭವ. ಈ ದಿನ ಬೆಳಗ್ಗೆ ಮನೆಯವರೆಲ್ಲ ತಂತಮ್ಮ  (ಅ)ಕಾರ್ಯಗಳಿಗೆ ಹೋದಮೇಲೆ ಎಲ್ಲ ಕಿಡಕಿ ಬಾಗಿಲುಮುಚ್ಚಿ  ಒಬ್ಬನೇ ಮನೆಯಲ್ಲಿ ಉಳಿಯುವಂತ ಅವಕಾಶ ಸಿಕ್ಕಿತ್ತು . ಅಬ್ಬಾ! ಮನೆ ಪೂರ್ತಿ ನಂದೆ . ನಿಜ ಹೇಳಬೇಕೆಂದರೆ ನಾನುನೂರಾರು ಜನರ ಹಿಂಡಿನಲ್ಲಿ ಎಷ್ಟು Jolly ಆಗಿ ಇರಬಲ್ಲೇನೋ ಅಷ್ಟೇ ಕುಶಿಯಾಗಿ ಏಕಾಂಗಿಯಾಗಿ ಇರಬಲ್ಲೆ ಎಂಬೊಂದು ಸತ್ಯಗೊತ್ತಾಗಿದ್ದು ಇವತ್ತೇ .ಏನೋ ಒಂದು ತಿಂಡಿ ಮಾಡ್ಕೊಂಡ್ ತಿಂದು , TV ಮುಂದೆ ಕೂತವನು ಜಪ್ಪಯ್ಯ ಅಂದ್ರೂ ಮೇಲೇಳಲಿಲ್ಲ .ಮನಸ್ಸು ಬದಲಾದಂತೆ ಚಾನೆಲ್ change ಮಾಡುತ್ತ, ನ್ಯೂಸ್ ಪೇಪರ್ ಓದಿದೆ.ಬಹುದಿನಗಳ ನಂತರ TV ಲಿ ಫಿಲಂ ನೋಡಿದೆ. ಆದರೆ ಫಿಲಂ ನಲ್ಲಿ ಬರುವ ನವರಸಗಳಿಗೂ ಮುಲಾಜಿಲ್ಲದೆ ಸ್ಪಂದಿಸುವ ಅವಕಾಶ ಸಿಕ್ಕಿದು ಮಾತ್ರ ಇವತ್ತೇ . ಏನೋ ಗೊತ್ತಿಲ್ಲ ಎಲ್ಲರೂ ಇದ್ದಾಗ ಹಾಸ್ಯವು ನಗುತರಿಸುವುದಿಲ್ಲ , ತೀರ ದುಃಖದ ಸನ್ನಿವೇಶವೂ ನಮ್ಮ ಕಣ್ಣಲ್ಲಿನ ಹನಿಯನ್ನು ಬಿಗಿಯಾಗಿ ಹಿಡಿದುಬಿಡುತ್ತದೆ. ಆದರೆ ಈ ದಿನ ಹಾಗಲ್ಲ , "ಈ ಬಂಧನ " ಫಿಲಂ ನೋಡುವಾಗ ಕಣ್ನೀರಿತ್ತಿದ್ದೇನೆ,ಕಾಮಿಡಿ ಟೈಮ್ ನೋಡಿ ಹೊಟ್ಟೆ ಹಿಡಿಯುವಂತೆ ನಕ್ಕುಬಿಟ್ಟಿದ್ದೇನೆ, B4U ಚಾನೆಲ್ ಹಾಕಿಕೊಂಡು ಮೈ ಮನ ಬಿಚ್ಹಿ ಕುಣಿದಾಡಿದ್ದೇನೆ. Times Now ನ' ಅರ್ನಬ್ ಗೋಸ್ವಾಮಿ ' ಯ ವಾಕ್  ಚತುರತೆಗೆ ಚಪ್ಪಾಳೆ ತಟ್ಟಿದ್ದೇನೆ. ಎಷ್ಟೇ JOVIAL ಆಗಿರೋ ಮನುಷ್ಯ ಕೂಡ ಎಲ್ಲರೂ ಇದ್ದಾಗ ಬಚ್ಚಿಡಬೇಕಾದ ಎಲ್ಲ ಭಾವಗಳನ್ನು ಈ ಲೋನ್ಲಿನೆಸ್ ನಲ್ಲಿ ವ್ಯಕ್ತಪಡಿಸುತ್ತಾ ಹಾಯಾಗಿ ಕಳೆದ ಕುಶಿ ನನಗೆ . ಆದರೆ ಏಕಾಂತದಲ್ಲಿ ಮಾತಾಡಬಹುದಾದ ಗೆಳತಿಯೊಂದಿಗೆ ಮಾತ್ರ ಮಾತಾಡಲಾಗಲಿಲ್ಲ . ( ಅದಕ್ಕೆ ಬೇಸರವೂ ಆಗಲಿಲ್ಲವಲ್ಲ ಎಂಬುದು ವಿಶೇಷ ) . ಕೊನೆಯಲ್ಲಿ ರೂಂ ಪೂರ್ತಿ ಕತ್ತಲು ಮಾಡಿಕೊಂಡು ಹಗಲಿನಲ್ಲಿ ,ಈ ಚಳಿಯಲ್ಲಿ ರಗ್ ಹೊದ್ದು ಮಲಗುವುದಿದೆಯಲ್ಲ , ಅದನ್ನ ಅನುಭವಿಯೇ ತೀರಬೇಕು ಅಲ್ವೇ ?? .  ಇದಾದಮೇಲೆ evening walk ಹೋಗಿ ರೋಡ್ ಸೈಡ್ ಲ್ಲಿ ' ಪಾನಿಪುರಿ ' ತಿಂದು ಬಂದೆ ನೋಡಿ ,ಅಲ್ಲಿಗೆ ಇದೊಂದು ಪಕ್ಕಾ 'ಸ್ಪೆಷಲ್ ಡೇ " ಆಗೆಬಿಟ್ಟಿತು. ಕೆಲವೊಮ್ಮೆ ಎಲ್ಲರೂ ಇದ್ದು ಲೋನ್ಲಿ ಅನ್ನಿಸಿರುತ್ತದೆ ಆದರೆ ಈ ದಿನ ಏಕಾಂಗಿ ಯಾಗಿದ್ದ  ದಿನ ಕೊಟ್ಟ ಕುಶಿ ಮಾತ್ರ Unforgettable . ಅದೇ ಔಟಿಂಗ್ , ಪಾರ್ಟಿ, ಡಿಜೆ , ಬೂಜ್ , ಸಿನಿಮಾ , ನಾಟಕ , ಪಬ್ಬು , ಬಾರ್ , ಕಾಫಿ ಡೇ, ಸರಸ ,ಪ್ರೀತಿ-ಪ್ರೇಮ . ಕಾಮ. ಕರ್ಮ- ಈ ಎಲ್ಲ ಸಂಗತಿಗಳನ್ನು ಹೊರತಾಗಿಯೂ ಇಂತ ಸಂಭ್ರಮವೊಂದು ನನಗೆ ನನ್ನಿಂದಲೇ ಸಿಗಬಹುದು ಅಂತ ಗೊತ್ತಾದ ಈ ದಿನಕ್ಕೆ ನನ್ನ ಅಭಿನಂದನೆಗಳು ...ಅದಕ್ಕಾಗೆ ಅನ್ನಿಸುತ್ತೆ " learn to spend your personal time for yourself " ಅಂತ ಹೇಳಿರೋದು . ಅದೇನೇ ಇರಲಿ ನಾನಂತೂ ಮತ್ತೊಂದು ಅಂತಾ ದಿನಕ್ಕಾಗಿ ಕಾಯ್ತಾ ಇರ್ತೀನಿ ....... ನೀವು try ಮಾಡಿ , ಸುಳ್ಳಾದರೆ ಆಮೇಲೆ ನನಗೆ ಹೇಳ್ರಿ . ಏನಂತೀರಿ ???
ಏನಂತೀರಿ ????????


                                                                    @ ಶಿವೂ @

Wednesday, December 22, 2010

When he retires from cricket, .........!!!!

Let Him Play as long as he wants .........

" I know him, he is is not after the records but they do. I still remember how sad he was when India lost a test match in Chennai.1989 against Pakistan though he hits a tremendous century. Me and Waqar always wanted to bowl him because it was a prized wicket for us . When he hit his 50th test ton, at the age of 37, it shows the commitment and passion he has towards cricket and am sure it will continue as long as he plays cricket. He is not only a good cricketer but a gentle human being. For all those who says he plays for records, I have to tell them that " hey common people grow up understand cricket better. because if he would have been not played such innings India would have been beaten even worst". 

If  we see the pace he is going at the age of 37,sure we have yet more things to come upon to admire this superb Player. So  I request Indian cricket committee and selection board that please please please don't tell him to retire.
Let him play as long as he wants........... and  I am very sure that He will make an exuberant exit with honor and pride when he wishes to move ....

I must say this ." When this man exits from the world of cricket , the game of cricket will lose lots of it's fans...


( This is  the summary of what Wassim Akram ,former skipper of Pakistan opined on "THE GOD OF CRICKET ")


" GO SACHIN .... GO CRICKET..... GO INDIA .... "




Monday, November 29, 2010

ನ್ಯಾನೋ ಕಥೆ

                            " ಪ್ರತಿಫಲ "

ಆತ ಕಟ್ಟಾ ಪರಿಸರವಾದಿಯಾಗಿದ್ದ. ಮರಗಳನ್ನು 'ಅಪ್ಪಿಕೋ ' ಚಳುವಳಿಯಲ್ಲಿ  ಬಹುಗುಣ ಅವರ ಜೊತೆ ಸಕ್ರಿಯವಾಗಿ ಪಾಲ್ಗೊಂಡಿದ್ದ .ಅರಣ್ಯ ರಕ್ಷಣೆಗಾಗಿ ಮತ್ತು ಮರಗಳನ್ನು ಬೆಳೆಸಲು ತನ್ನ ಜೀವನವನ್ನೇ ಮುಡಿಪಾಗಿಟ್ಟಿದ್ದ .ಒಂದು ದಿನ ಅರಣ್ಯ ರಕ್ಷಣೆ ಕುರಿತು ತನ್ನ ಅನುಯಾಯಿಗಳಿಗೆ ಭಾವನಾತ್ಮಕವಾಗಿ ಭಾಷಣ ಮಾಡುತ್ತಿದ್ದಾಗ ,ಅವನು ಯಾವ ಮರದಡಿಯಲ್ಲಿ ನಿಂತು ಭಾಷಣ ಮಾಡುತ್ತಿದ್ದನೋ ಅದೇ ಮರ ಅವನಮೇಲೆ ಮುರಿದುಬಿತ್ತು .ಪಾಪ,ಆತ ಸತ್ತೆ ಹೋದ . ಕೊನೆಗೆ ಅವನ ದೇಹವನ್ನು ಸುಡಲು ಅದೇ ಮರವನ್ನು ಬಳಸಿಕೊಳ್ಳಲಾಯಿತು ...ಇದನ್ನು ಏನೆನ್ನಬೇಕೋ ತಿಳಿಯುತ್ತಿಲ್ಲ . ದುರಂತವೆಂದರೆ 'ಶೇಕ್ಸ್ ಪಿಯರ್'ನ ಮ್ಯಾಕ್ ಬೆತ್ ,ಒಥೆಲೋ ,ಕಿಂಗ್ ಲಿಯರ್ .ರೋಮಿಯೋ ಜೂಲಿಯೆಟ್ ,ಗಳನ್ನು ಉದಾಹರಿಸುತ್ತೇವೆ, ಆದರೆ ಅವರೆಲ್ಲ ತಾವು ಮಾಡಿದ ತಪ್ಪುಗಳಿಗಾಗಿ ದುರಂತ ಸಾವು ಕಾಣಬೇಕಾಯಿತು . ಹಾಗಾದರೆ ,ಈ ಪರಿಸರವಾದಿಯದು  ನಿಜವಾದ ದುರಂತ ಅಲ್ಲವೇ ????

                                                                                                    @ಶಿವೂ@

                                
                                 

Thursday, November 25, 2010

                                                                  "   ಕೇಳೇ ಗೆಳತಿ .....  "                

 ಆಗ..
ನೀನಿದ್ದೆ .
ನಾನೂ ಇದ್ದೆ. 
    
ಈಗ .......?
ನೀನು ಇದ್ದೀಯ .
ನಾನು ಇದ್ದೇನೆ. 

ಆದರೆ....
ನಿನ್ನೊಡನೆ ನಾನಿದ್ದೇನೆ ನಿಜ .
ನನ್ನೊಡನೆ ನೀನಿಲ್ಲವೇ... ?

ಆದರೂ .....
ನಿನ್ನೊಂದಿಗೆ ನಾ ನಡೆದಾಡಿದ 
ಜಾಗಗಳಲ್ಲೆಲ್ಲ ನಾ ನಿನ್ನ ಅರಸುತ್ತೇನೆ .

ನೀ ಬರುವದಿಲ್ಲ ಎಂಬ 
ಖಚಿತ ಮಾಹಿತಿಯಿದ್ದರೂ 
ನಿನಗಾಗಿ  ಕಾಯುತ್ತ ಕೂರುತ್ತೇನೆ .

ನಿನಗೆ ಗೊತ್ತಾ,
ನಾವು ಕೂತು ಹರಟುತ್ತಿದ್ದ 
ಆ ಪಾರ್ಕಿನ ಬೆಂಚು ಕಲ್ಲಮೇಲೆ 
ಉದ್ದುದ್ದ ಹುಲ್ಲು ಬೆಳೆದು
ಕೊಯ್ಲಿಗೆ ಬಂದಿದೆ ಕಣೆ.

ಬಾಚಿ ತಬ್ಬಿಕೊಳ್ಳುತ್ತಿದ್ದ ನೀನು 
ಅದೇ ಪಾರ್ಕಲ್ಲೇ ತಾನೆ 
ಮತ್ತೆಂದೂ ತಬ್ಬಲಾರದಷ್ಟು 
ದೂರ 'ತಳ್ಳಿ' ಹೋಗಿದ್ದು!!.

ಒಂದು ಸತ್ಯ ಹೇಳಿಬಿಡುತ್ತೇನೆ ಕಣೆ ;
ಆಗ ನೀ ನನಗೆ ಕೊಟ್ಟಷ್ಟೇ ಪ್ರೀತಿಯನ್ನು 
ಈಗಲೂ ಮತ್ಯಾರಾದರೂ ಕೊಟ್ಟಾರು .
 
ಆದರೆ ...
ಈಗ ನೀ ಕೊಡುತ್ತಿರುವ 
ಯಾತನೆಯಿದೆಯಲ್ಲ ಅದನ್ನು 
ಯಾರೂ ಕೊಡಲಾರರು !!!

                                                                                                      @ ಶಿವೂ @

Sunday, November 14, 2010

ನ್ಯಾನೋ ಕಥೆಗಳು

                             " ಸಂಜೆ ಐದರ ಹುಡುಗಿ "


ಬೆಂಗಳೂರಿಂದ ಶಿವಮೊಗ್ಗಕ್ಕೆ ಬಸ್ ನಲ್ಲಿ ಹೋದರೆ ಏನಿಲ್ಲವೆಂದರೂ 6 ಗಂಟೆ ಬೇಕು . ಈ ಪ್ರಯಾಣದುದ್ದಕ್ಕೂ 
ಪಕ್ಕದಲ್ಲಿ ಕೂತ ಆ ಹುಡುಗಿ, ಒಂದೂ ಮಾತಾಡಿರಲಿಲ್ಲ . ಇನ್ನೇನು ಶಿವಮೊಗ್ಗದಲ್ಲಿ ಬಸ್ ಇಳಿದು ಹೋಗಬೇಕು 
ಇದ್ದಕ್ಕಿದ್ದಂತೆ  "ಧೋ" ಎಂದು ಮಳೆಸುರಿಯತೊಡಗಿತ್ತು. ಬಸ್ ಇಳಿದ ತಕ್ಷಣ ಸುರಿಯುತ್ತಿದ್ದ ಆ 'ಸಂಜೆ ಐದರ ' ಮಳೆಯಲ್ಲಿ 
ಅವಳು ಅಜಾಮತ್ತಾಗಿ ನನ್ನ ಕೈ ಹಿಡಿದು ಎಳೆದು ಹೋಟೆಲ್ ಅಶೋಕ ಕ್ಕೆ  ಕರೆದೊಯ್ದಳು. ಬಿಸಿ ಬಿಸಿ ಮಸಾಲೆ ದೋಸೆ ಆರ್ಡರ್ ಮಾಡಿದಳು. ಈ ನಡುವೆ ನಾನೆಷ್ಟೇ ಮಾತಾಡಿಸಿದರೂ ಒಂದೂ ಮಾತಾಡಲಿಲ್ಲ ಆ ಹುಡುಗಿ. ಸರಿ,ದೋಸೆ ಬಂತು . ತಿಂದದ್ದೂ ಆಯಿತು .ಬಿಲ್ ಬಂತು. ಅವಳೇ ಕೊಟ್ಟದ್ದೂ ಆಯಿತು. ನಾನು ಕೇಳಿದೆ , " ಇಗಲಾದರೂ ನಿಮ್ಮ ಹೆಸರು ಹೇಳುತ್ತೀರಾ ? ."  ಆಕೆ ಮಾತಾಡಲಿಲ್ಲ. 'ಆಟೋ ' ಎಂದು ಕೂಗಿದಳು . ಆಟೋ ಹತ್ತಿದಳು. ನಾನು 'ಪ್ಲೀಸ್ ಮೊಬೈಲ್ ನಂಬರ್ ಕೊಡ್ರಿ ಅಂದೆ'. ಉಹುಂ! ಏನೊಂದು ಮಾತಾಡಲಿಲ್ಲ ಆಕೆ. Atleast ,ಒಂದು bye  ಕೂಡ ಹೇಳದೆ ಹೋಗಿಬಿಟ್ಟಳು . ಇದಾಗಿ ಈಗ ಬರೋಬ್ಬರಿ 25 ವರ್ಷಗಳಾಯ್ತು . ಈಗಲೂ ನಾನು ಶಿವಮೊಗ್ಗಕ್ಕೆ ಹೋಗುವಾಗಲೆಲ್ಲ ಬಸ್ ನಲ್ಲಿ ಅವಳೆಲ್ಲಾದರೂ ಬರಬಹುದಾ ಅಂತಾ ಹುಡುಕಾಡುತ್ತೇನೆ. ಮತ್ತೂ ಶಿವಮೊಗ್ಗಕ್ಕೆ ಹೋದಾಗಲೆಲ್ಲ ಅಶೋಕ ಹೋಟೆಲ್ ನ ಆ ಟೇಬಲ್ ನಲ್ಲೇ ಕೂತು ಬಿಸಿ ಬಿಸಿ ದೋಸೆ ತಿಂದು ಬರುತ್ತೇನೆ. ಎಲ್ಲಿದ್ದೀಯೇ ಮಾರಾಯ್ತಿ ? ಹೇಗಿದ್ದೀಯೇ ? ಅಂತಾ ಪ್ರೀತಿಯಿಂದ ಬೈದುಕೊಂಡು ಬರುತ್ತೇನೆ. ಸಂಜೆ ಐದರ ಮಳೆ ಬಂದಾಗಲೆಲ್ಲ ಅವಳ ನೆನಪಾಗುತ್ತೆ. ..........!!!!

                                                                   @ ಶಿವೂ@











                          "  ಸತ್ತೇ ಹೋದ !!"
" ಅವನದು ತುಂಬಾ ವಿಚಿತ್ರ ವ್ಯಕ್ತಿತ್ವ . ಒಂದು ದಿನ ರಾತ್ರಿ ಮಲಗುವಾಗ ಕೂತು 
ತಾನು ಸಾಯಬಹುದಾದ ವಿವಿಧ ಬಗೆಗಳನ್ನು ಪಟ್ಟಿ ಮಾಡತೊಡಗಿದ . ಆಶ್ಚರ್ಯ ಅಂದರೆ 
ಅವನು ಒಟ್ಟು ೧೫೦ ರೀತಿ ಸಾಯಬಹುದಾದ ಸಾಧ್ಯತೆಗಳನ್ನು ಬರೆದೇಬಿಟ್ಟ .ಮರುದಿನ ಬೆಳಗ್ಗೆ 
ಪೇಪರ್ ಓದುತ್ತಿರುವಾಗ ಅವನ ಉಸಿರು ನಿಂತೇ ಹೋಗಿತ್ತು . ಅದಕ್ಕೆ ಏನು ಕಾರಣ ಎಂದು  
ಪತ್ತೆಹಚ್ಚಿದಾಗ ತಿಳಿದದ್ದು ಮಾತ್ರ, ಆ 150 ಕಾರಣಗಳನ್ನೂ ಬಿಟ್ಟು ಬೇರೆಯೇ ಆಗಿತ್ತು. ಆದರೆ ಆತ 
ಪಟ್ಟಿ ಮಾಡಿದ ಸಾವಿನ ಕಾರಣಗಳನ್ನೇ ಅವನ ಮಗ , " ನನ್ನ ಸಾವಿಗೆ ಕಾರಣಗಳು " ಎಂಬ ಶೀರ್ಷಿಕೆಯಡಿಯಲ್ಲಿ 
ಪುಸ್ತಕ ಪ್ರಕಟಿಸಿದ . ಆ ಪುಸ್ತಕ ಭಾರೀ ಮಾರಾಟ ಕಂಡು ಸಾವಿರಾರು ರೂಪಾಯಿ  ಲಾಭ ತಂದುಕೊಟ್ಟಿತು .

                                                           @ ಶಿವು@

Sunday, October 31, 2010

ಬೆತ್ತಲಾದವ !!!!


ಯಾರೋ ಹೇಳಿದ್ದರು ಆ ತಿರುಕಂಗೆ,
"ಬದುಕಲ್ಲಿ ಮುಖ್ಯ ಮಾನ ಮರ್ಯದೆ" ಎಂದು.
ತಿರಿದು ತಿಂದರೂ ಮರ್ಯಾದೆಗೆ
ಬದುಕುತ್ತಿದ್ದೇನೆಂದು ಆತ ಬೀಗುತ್ತಿದ್ದ.

ಬರುಬರುತ್ತ ಮೈಮೇಲ
ಬಟ್ಟೆ ಚಿಂದಿಯಾಯಿತು.
ಮಂದಿ ನೋಡಿ ಅಸಹ್ಯ ಪಟ್ಟರು.
ಮಕ್ಕಳು ಗುಪ್ತಾಂಗಗಳ ನೋಡಿ ನಕ್ಕರು.
ಬೀದಿ ನಾಯಿ ಮೈಮೇಲೆರಗತೊಡಗಿದವು.

ಚಿಂದಿಬಟ್ಟೆಯಿಂದ ಇಣುಕುವ
ಅಂಗಾಂಗಗಳನ್ನು ಮುಚ್ಚಲೆತ್ನಿಸಿದ ಆ ತಿರುಕ.
ಒಮ್ಮೊಮ್ಮೆ ಗೆದ್ದ, ಕೆಲವೊಮ್ಮೆ ಸೋತ.
ಇನ್ನು ವಿಕಸಿಸಲಸಾಧ್ಯವೆಂಬ ಸ್ತಿತಿಗೆ ಬಂತು
ಆ ತಿರುಕನ ಚಿಂದಿ ಬಟ್ಟೆ.

"ಫ್ಹುಟ್ ಪಾತ್ " ನಲ್ಲಿ ಮಲಗಿದ್ದ ಅವನನ್ನು
ರೇಗಿಸಿತೊಂದು ಪಡ್ಡೆ ಹುಡುಗರ ಗುಂಪು.
ತಿರುಕ ಸಹನೆ ಕಳೆದುಕೊಂಡಿದ್ದ
ಮೈಮೇಲಿದ್ದ ತುಂಡುಬಟ್ಟೆಯನ್ನೂ ಕಿತ್ತೆಸೆದ.
ಬಣ್ಣಬಣ್ಣದ ಸಮಾಜಕ್ಕೆ  ತನ್ನ ಬೆತ್ತಲೆ ಮೈಯೊಡ್ಡಿ ನಿಂತ.

ಹೀಗೆ ಬಟ್ಟಂಬಯಲಲ್ಲೇ ಬೆತ್ತಲಾದವ
ಮುಗ್ದ ಮಗುವಾದ.
ಬಟ್ಟೆಗೆಂದು ದೇವರಲ್ಲಿ ಮೊರೆದು ಮೊರೆದು ಸೊತಿದ್ದವ
ಕೊನೆಗೊಮ್ಮೆ ಬೆತ್ತಲಾದ.
ಮತ್ತು ಬೆತ್ತಲಾಗಿ ದೇವರೇ ತಾನಾದ.!!!

  ( ಬತ್ತಲಾಗದೆ ಬಯಲು ಸಿಕ್ಕದಿಲ್ಲಿ ಎಂಬ ಅಡಿಗರ ಸಾಲಿನಿಂದ ಪ್ರೆರಿತಗೊಂಡು ಬರೆದ ಕವನ )

( NMKRV COLLEGE BANGALORE ಇವರಿಂದ ಬಹುಮಾನ ಪಡೆದ ಕವನ )

                                           @ * ಶಿವೂ *@

ಸಾವು ..!



ನಿನ್ನ ಬಗ್ಗೆ ನನಗಿರುವ
ಭಯದಷ್ಟೇ
ನನ್ನ ಕಂಡರೆ ನಿನಗೆ
ವ್ಯಾಮೋಹವೇಕೆ ?

ನನ್ನ ಬದುಕು
ಅನಿಶ್ಚಿತವಾದಷ್ಟೇ
ನೀನು
ನಿಶ್ಚಿತವೇಕೆ ?


ನಿನ್ನಿಂದ ದೂರವಾಗಲು
ನಾ ಬಯಸಿದಷ್ಟೇ
ನನಗೆ ಹತ್ತಿರವಾಗಲು
ನೀ ಬಯಸುವೆಯೇಕೆ ?

ನಿನ್ನಿಂದ ನಾನು
ವಿಮುಖವಾಗುವಷ್ಟೆ ,
ನೀನು ನನ್ನನ್ನು ಅಪ್ಪಲು
ಬಯಸುವೆಯೆಕೆ ?

ನಿನ್ನ ಸುಳಿವು  ಸಿಕ್ಕು
ನಾನು ದೂರ ಓಡುವಾಗಲೆಲ್ಲ
ನೀನು ಬಿಡದೆ ನನ್ನನ್ನು
ಬೆಂಬತ್ತುವೆಯೇಕೆ ?

ನಾನೊಬ್ಬ Degnified ಆಗಿದ್ದರೂ
appointment ಇಲ್ಲದೇ
ಮನೆಗೆ ನುಗ್ಗುವಿಯೇಕೆ ?

ಎಂದಾದರೊಂದು ದಿನ
ನಾ ನಿನ್ನ ಸೇರಲೇಬೇಕಲ್ಲವೇ ?
ಅಲ್ಲಿಯ ತನಕ ನನ್ನ ತಂಟೆ
ನಿನಗೇಕೆ ?

ನಾನಾಗಿಯೇ ಬರುವ ತನಕ
ನೀ ಕಾಯುವುದಿಲ್ಲ ಏಕೆ ?
ಹಾಗೆ ನೀ ಕಾದರೆ ನಾನು ಬರುವುದಿಲ್ಲ
ಎಂಬುದೂ ನಿಗೆ ಗೊತ್ತೆ.......?!

              * ಶಿವೂ *

" ಯಾವಾಗ ? "

ಪ್ರಿಯೆ,
ನಿನ್ನ ನೆನಪಲ್ಲಿ
ನಾ ಕೊಟ್ಟ
ಮುತ್ತುಗಳೆಲ್ಲ ಇನ್ನೂ
ನನ್ನ ತಲೆದಿಂಬಿನಲ್ಲೇ ಇವೆ.

ಅವೆಲ್ಲ ನಿನ್ನ ಕೆನ್ನೆಗೆ
ವರ್ಗಾವಣೆಯಾಗುವುದು
ಯಾವಾಗ ?

ನಿನಗೆ ಬರೆಯಬೇಕೆಂದಿದ್ದ
ಅದೆಷ್ಟೋ ಪ್ರೇಮ ಪತ್ರಗಳು
ನನ್ನ ಪೆನ್ನಲ್ಲೇ ಉಳಿದುಬಿಟ್ಟಿವೆ.

ಅವೆಲ್ಲ ಹಾಳೆಗಿಳಿದು
ನಿನ್ನ ಕೈಸೇರುವುದು
ಯಾವಾಗ ?

                   * ಶಿವೂ*   

ಹನಿ-ಕಹಾನಿಗಳು


ಗೆಳತಿ,
ಇನ್ನು ನಿನ್ನ ಮರೆತು
ಬಿಡುವುದೇ ಸರಿ
ಆದರೆ ಹೇಗೆ ಮರೆಯಲಿ
ನೀನು ಕನಸಲ್ಲ
ನಿಜ.
***********

ಗೆಳತಿ,
ಅದೊಂದು ಪ್ರಶ್ನೆ ನೀನು ಕೇಳಲೇಬೆಡ
"ನನಗೊಂದು ಬದುಕು ?ಕೊಡುತ್ತೀಯಾ " ಎಂದು.
ಖಂಡಿತಾ ಹೇಳುತ್ತೇನೆ
ಈ ಬದುಕು ನನಗೆ ಅಂತಾ
ಏನೇನು ಕೊಡುತ್ತೋ ಅದನ್ನೆಲ್ಲ
ನಿನಗೂ ವಂಚನೆಯಿಲ್ಲದೇ ಕೊಡುತ್ತೇನೆ.
******************

ಪ್ರಿಯೆ,
ಏನಿಲ್ಲವೆಂದರೂ ದಿನ ಕಳೆಯುತ್ತಿದೆ
ನೀನಿಲ್ಲವೆಂದರೂ ಸಮಯ ನಿಲ್ಲುವುದಿಲ್ಲ.
ಆದರೆ..?
ನಿನ್ನ ನೆನಪು ಇಲ್ಲದ
ಒಂದರೆಗಳಿಗೆ ಕೂಡ ನನ್ನಿಂದ ತಪ್ಪಿಸಿಕೊಳ್ಳಲಾರದು.
********************
              @* ಶಿವೂ * @

Saturday, October 30, 2010

 
ಮೊದಲ ಮುತ್ತು
 
ಅಬ್ಬಾ! ಎಷ್ಟು ದಿನದಿಂದ ಕಾದಿದ್ದೆ
ಆ ಒಂದು ಮುತ್ತಿಗಾಗಿ .
ಎರಡು ಅದರಗಳ ಸ್ಪರ್ಶ
ನೀಡುವ ರೋಮಾಂಚನಕ್ಕಾಗಿ.
 
ಏನೆಲ್ಲಾ ಕೇಳಿದ್ದೆ,ಓದಿದ್ದೆ ,ನೊಡಿದ್ದೆ
ಮೊದಲ ಮುತ್ತಿನ ಬಗ್ಗೆ .
ನರನಾಡಿಗಳ ರಕ್ತದೊತ್ತಡ ಹೆಚ್ಚಿಸಿ ,
ಮೈನವಿರೇಳಿಸುವ ಆ ಅದರಗಳ ಬಗ್ಗೆ.
 
 
ಆ ನಯವಾದ, ಮೃದುವಾದ ಅದರಗಳೂ
ಈ ಅನುಭವಕ್ಕೇ ಕಾದಿದ್ದಿರಬೇಕು
ಅದೊಂದು ದಿನ ಬಂದೇ ಬಿಟ್ಟಿತು
ನನ್ನ ಕೆನ್ನೆಯನ್ನೂ ಅವಳ ಅದರಗಳನ್ನೂ
ಯಾರೂ ತಡೆಯುವಂತಿರಲಿಲ್ಲ.
 
ವಾಹ್! ಎಂಥಾ ರಸಾನುಭವ
ಈ ಮೊದಲ ಮುತ್ತಿನ ಅನುಭವ .
ಆಪಾದ ಮಸ್ತಕದವೆಗೂ ಕಂಪನ
ಹೇಳುವಂತಿಲ್ಲ ಪಡೆದೇ ತೀರಬೇಕು ಆ ಮತ್ತನ್ನ .
 
ಹೌದೂ ,
ನನ್ನ ಕೆನ್ನೆಗೆನೋ ಅದು ಮೊದಲ ಮುತ್ತು
ಅದು ನನಗೆ ಕಂಡಿತಾ ಗೊತ್ತು.
ಆದರೆ ಅವಳ ಅದರಗಳ ಬಗ್ಗೆ ಯಾರಿಗೆ ಗೊತ್ತು ???
 
                      @ಶಿವಾ@
" ಗುಟ್ಟು ಬಿಟ್ಟವರ್ಯಾರು ? "
 
ಅವಳಿಗೊಂದು ಗುಟ್ಟು ಹೇಳಿ 
'ಯಾರಿಗೂ ಹೇಳಬೇಡ ಎಂದೆ .
ಏಕೆಂದರೆ ಅವಳು ನನಗೆ 
ತುಂಬಾ ಬೇಕಾದವಳು .
 
ಅವಳಿಗೆ ಯಾರೋ ತುಂಬಾ
ಬೇಕಾದವರಿರಬೇಕು ,
'ನಿನಗೆ ಮಾತ್ರ ಹೇಳಿದ್ದೇನೆ ಯಾರಿಗೂ ಹೇಳಬೇಡ '
ಎಂದು ಆಕೆ ಅವರಿಗೆ ಹೇಳಿದಳು .
 
ಆ ಅವರಿಗೆ ಮತ್ತೆ  ಯಾರೋ 
ಆ ಮತ್ಯಾರಿಗೋ ಇನ್ಯಾರೋ 
ಈ ಇನ್ಯಾರಿಗೋ ಬೇರೆಯಾರೋ .
 
ಒಂದು ದಿನ ,ನಾನ್ಯಾರಿಗೆ ಬೇಕಾಗಿದ್ದೇನೋ 
ಅವರು ನನ್ನ ಕಿವಿಗೊಂದು ಗುಟ್ಟು ಇಟ್ಟು,
'ಇದನ್ನು ಯಾರಿಗೂ ಹೇಳಬೇಡಿ' ಎಂದರು .
 
ಈ ಕಥೆಯ ದುರಂತವೆಂದರೆ :
ನನಗೆ ಮೊದಲೊಬ್ಬರು ಹೇಳಿದ್ದ ಗುಟ್ಟು,
ನಾನು ಅವಳಿಗೆ ಹೇಳಿದ ಗುಟ್ಟು ,
ಈಗ ನನಗೇ ಬೂಮರಾಂಗ್ ಆಗಿದ್ದು. 
 
ಈಗ ನೀವು ಹೇಳಿ ,
ಹಾಗಾದರೆ ಇಲ್ಲಿ ಗುಟ್ಟು ಬಿಟ್ಟವರ್ಯಾರು ?
 
                                          @ ಶಿವಾ@
    

Sunday, October 24, 2010

ಮತ್ತೊಂದಿಷ್ಟು ಹಾಯ್ಕುಗಳು...



"ಮದು-ವೆ"



ಮಗನಿಗೆ "ಮದ" ಬಂದೇ ಬಿಟ್ಟಿದೆ

ಎಂದು ತಿಳಿದ ತರುವಾಯ

ಅದನ್ನು ನಿಯಂತ್ರಿಸಲು ತಂದೆ ತಾಯಿಗಳು

ಕಂಡುಕೊಡ- "ವೇ"

******************

ಸಂಭಾವನೆ



ನನಗೆ ಆಗಾಗ ದೊರಯುತ್ತದೆ

ಸಂಭಾವನೆ ಏಕೆಂದರೆ

ನಾನು ಬರೆದು ಕಳಿಸುತ್ತೆನೆ

Some-ಭಾವನೆ.

********************



ಇಲ್ಲಾ ಕಣೆ ಇನ್ನು ಸುಮ್ಮನಿರಲು

ಸಾದ್ಯವೇ ಇಲ್ಲ.

ಒಂದೋ ನೀನು ನನ್ನ ಪ್ರೀತಿಸಬೆಕು

ಇಲ್ಲವೆ ನಾನು ಐಶ್ವರ್ಯ ರೈ ಗೆ ಓಕೆ ಅನ್ಬೇಕಾಗುತ್ತೆ .

*****************************



ಹೇಳೆ ಹುಡುಗಿ,

ನೋವೆಲ್ಲ ನನ್ನದೇ ಆಗಿರುವಾಗ,

ಕಶ್ಟಗಳೆಲ್ಲಾ ನಾನೇ ಎದುರಿಸುತ್ತಿರುವಾಗ

ಮತ್ತೇಕೆ ನಿನ್ನ ಕಣ್ಣಲ್ಲಿ ನೀರು ?

****************************



ನೀವೇ ಹೇಳಿ,

ಕಾಮವನ್ನು ಕಾಣದೇ ಮಾಡುವಾಗ

ಪ್ರೇಮವನ್ನು ಕದ್ದು ಮಾಡಿದರೇನು ತಪ್ಪು ?

*****************************



ಮೊನ್ನೆ ರಜೆಗೆಂದು ಊರಿಗೆ ಹೊದಾಗ

ಮೂಲೆಮನೆ ಕೆಲಸದ ಹುಡುಗಿ ಕೇಳಿದಳು

" ಈ ದೀಪಾವಳಿಗೆ ಸಿಟಿನ್ಯಾಗೆ ಹುಡ್ಗೀರ್ ಪ್ಯಾಂಟ್

ಹಾಕ್ತಾರಲ್ಲ ಅಂತದ್ದೊಂದು ಕೊಡಿಸ್ತೀರ ಒಡೆಯ ?

ಗದ್ದೆ ಕುಯ್ಲು  ಮಾಡೊಕೆ ಸ್ಯಾನೆ ಆಗ್ತದೆ

ಜೊತೆಗೆ ನನ್ ಮಗ ಅದನ್ನೆ ಸ್ಕೂಲ್ ಗೂ

ಹಾಕೊಂಡ್ ಹೊಗ್ಬೋದು " ನಾನು ಅವಕ್ಕಾದೆ.

**********************************

                     

                                                *ಶಿವ್ಕುಮಾರ್ ಮಾವಲಿ*














Saturday, August 14, 2010

ಹಾಯ್ಕುಗಳು...

**************




ಪಾಪ ಚಿಕ್ಕ ಸಸಿಗೆ
ರಭಸದ ಮಳೆ, ಗಾಳಿ
ತಡೆದುಕೊಳ್ಳುವ ಶಕ್ತಿ
ಇರುವುದಿಲ್ಲ....

ಹಾಗಂತ ಮಳೆ ಬರದೇ ನಿಲ್ಲುವುದಿಲ್ಲ
ಮತ್ತು ಗಾಳಿ ಬೀಸದೇ ಇರಲಾಗುವುದಿಲ್ಲ.


* * * * *


ತಪ್ಪು ನಿನ್ನದಲ್ಲ ಗೆಳತಿ,
ಮೋಸ ಮಾಡುವ ಮುನ್ನ
ನೀ ಕೊಟ್ಟ ಎಲ್ಲಾ ಸುಳಿವುಗಳನ್ನೂ
ಸುಳ್ಳೆಂದು ನಂಬಿದ ನನ್ನ ಅತಿರೇಕದ
ಪ್ರೀತಿಯದ್ದೇ......


* * * * *


ಹೊಯ್ ಮಾರಾಯ್ತಿ,
ನೀ ಮನಸು ಕೊಡದಿದ್ದರೂ
ಬೇಡ..
ಪ್ರೀತಿ ಕೊಡದಿದ್ದರೂ ಪರವಾಯಿಲ್ಲ
ಒಂದೇ ಒಂದು ಸರಿ ಹೋಟೆಲ್
ಬಿಲ್ಲನ್ನಾದರೂ ಕೊಟ್ಟುಬಿಡು ಪ್ಲೀಸ್...


* * * * * *


ಕೊನೇ ಸಲ ಹೇಳ್ತಿನಿ ಕಣೆ,
ನಾನು ಮೊದಲ ಮುತ್ತು ಕೊಟ್ಟಿದ್ದು
ನಿನಗಲ್ಲ.....
ಆಗ ತಾನೆ ನನ್ನ ಮೊದಲ ಹಲ್ಲು
ಮುರಿದುಬಿದ್ದಿತ್ತು....


*********************


*ಮಾವಲಿ*.

Wednesday, August 11, 2010

ಸುಮ್ನೆ ಒಂದು ಕವನ ಅಂತಾ....!!

ಅದೇಕೋ ಅವಳೊಂದು

ಚಿಕ್ಕ ಸರ್ಕಲ್ ಬರೆದುಕೊಂಡು
ನನ್ನನ್ನು ಹೊರದೂಡಿದಳು.


ನಾನು,,,,,,
ದೊಡ್ದದೊಂದು ಸರ್ಕಲ್ ಬರೆದು
ಅವಳನ್ನು ಅದರೊಳಗೆ ಎಳೆದುಕೊಂಡೆ.


ಅದೆಶ್ಟು ದೊಡ್ಡದೆಂದರೆ ,
ಅದರೊಳಗೆ ಅವಳೆಶ್ಟೇ ಚಿಕ್ಕ ಚಿಕ್ಕ ಸರ್ಕಲ್
ಬರೆದುಕೊಂಡು ನನ್ನ ಹೊರಹಾಕಲೆತ್ನಿಸಿದರೂ
ನನ್ನ ಸರ್ಕಲ್ ನ ಪರಿಮಿತಿಯಲ್ಲೇ ಅವಳಿರುತ್ತಾಳೆ.


ಅಂದಹಾಗೆ ಇದು ನಾನವಳನ್ನು
ಪ್ರೀತಿಸಿದ ಬಗೆಯಲ್ಲ ...
ಮೋಸ ಮಾಡಿ ಹೊರಟ ಅವಳನ್ನು
ಬಂದಿಸಿಟ್ಟ ಪರಿ ಇದು ........






- ಶಿವಕುಮಾರ್ ಮಾವಲಿ.